ಬರೆಯಬೇಕು ಚಿತ್ತಾರ
ಅಂಗಳಕ್ಕೊಂದು ಶೃಂಗಾರ
ಕಸಕಡ್ಡಿ ಕಲ್ಲು ಮಣ್ಣು
ಗುಡಿಸಿ ತೊಳೆದು ಬಳಿದು
ನೆಲವಾಗಬೇಕು ಬಂಗಾರ
ಬರೆಯಬೇಕು ಚಿತ್ತಾರ
ಚಿತ್ತಾರವಾಗಬೇಕು ಸುಂದರ
ಉದ್ದ ಗೆರೆಗಳಾದರೆ ಲೇಸು
ಅಡ್ಡ ಗೆರೆಗಳಾದರೆ ಸಲೀಸು
ಸಣ್ಣ ಚುಕ್ಕಿ ದೊಡ್ಡ ಚುಕ್ಕಿ
ಕೂಡಿ ಬರೆಯಬೇಕು
ವಕ್ರವಾದರೆ ವಕ್ರ
ನೇರವಾದರೆ ನೇರ
ರಂಗೋಲಿ ಬರೆವ ಕೈ
ಮಿಗಿಲಾಗಿ ಮನಸ್ಸು
ತಿಳಿಯಾಗಿ ಪರಿಶುದ್ಧವಾಗಿ
ಆಗಷ್ಟೇ ಚಿತ್ತಾರಕ್ಕೊಂದು ಜೀವ
ಅನನ್ಯತೆಯ ಭಾವ
ಚಿತ್ತಾರವೇನು ಶಾಶ್ವತವಲ್ಲ
ಕಾಲ್ತುಳಿತಕ್ಕೆ ಬಿರುಗಾಳಿ ಮಳೆಗೆ
ನೊಂದು ನಲುಗಬಹುದು
ಮಳೆಯ ಆರ್ಭಟಕೆ
ಕೊಚ್ಚಿ ಹೋಗಲು ಬಹುದು
ಅದೃಷ್ಟ ಆಯಸ್ಸಿದ್ದರೆ
ಸೂರ್ಯ ಅಸ್ತಮಿಸುವರೆಗೂ
ಚಂದ್ರ ತಾರೆಗಳ ಅಂದ
ಸವಿಯಲೂ ಬಹುದು
ಬರೆಯುವುದಷ್ಟೇ ನಮ್ಮ ಕರ್ಮ
ಚಿತ್ತಾರದ ಅಳಿವು ಉಳಿವು
ಮೇಲಿನವನ ಧರ್ಮ
*****
Related Post
ಸಣ್ಣ ಕತೆ
-
ವಲಯ
ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…
-
ಸಾವು
ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…
-
ಮನೆಮನೆಯ ಸಮಾಚಾರ
ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…
-
ಮಿಂಚು
"ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…
-
ಬೂಬೂನ ಬಾಳು
ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…